![](https://blogger.googleusercontent.com/img/b/R29vZ2xl/AVvXsEgGWaJ7ak8fMVOCtR6EqBLFOSE5aTWXw-q5NgJVqnQWjtAh4ZevWAuYW9iDit24tc1-zhZd91_lD6DcfFGWHOsVnJVx3_n4UMLqy09c9YpN790vRwauPX3bV3iVXfxQkQNLYTpd13pyjzhhZesR2_Fl36ufNNAzlSh2Wwmw0HMorIbOr0yV7LXfMvjKLdM/s320/%E0%B2%95%E0%B3%81%E0%B2%B0%E0%B2%BF%E0%B2%97%E0%B2%BE%E0%B2%B0%E0%B2%B0%E0%B2%BF%E0%B2%97%E0%B3%86%20%E0%B2%89%E0%B2%9A%E0%B2%BF%E0%B2%A4%20%E0%B2%B8%E0%B2%82%E0%B2%9A%E0%B2%BE%E0%B2%B0%E0%B2%BF%20%E0%B2%9F%E0%B3%86%E0%B2%82%E0%B2%9F%E0%B3%8D%20%E0%B2%89%E0%B2%AA%E0%B2%95%E0%B2%B0%E0%B2%A3%20%E0%B2%85%E0%B2%B0%E0%B3%8D%E0%B2%9C%E0%B2%BF.webp)
ಬಾಗಲಕೋಟೆ: ಪ್ರಸಕ್ತ ಸಾಲಿಗೆ ಕರ್ನಾಟಕ ಕುರಿತು ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿ೦ದ ವಲಸೆ ಕುರಿಗಾರರಿಗೆ ಸಂಚಾರಿ ಟೆಂಟ್ ಮತ್ತು ಇನ್ನಿತರ ಪರಿಕರಗಳ ಕಿಟ್ಗಳನ್ನು ಉಚಿತವಾಗಿ ನೀಡುವ ಯೋಜನೆಯ ಸವಲತ್ತು ಮಂಜೂರಾತಿಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ 4, ಪರಿಶಿಷ್ಟ ಪಂಗಡ 2 ಹಾಗೂ ಸಾಮಾನ್ಯ ವರ್ಗಕ್ಕೆ 19 ಸೇರಿ ಒಟ್ಟು 25 ಫಲಾನುಭವಿಗಳಿಗೆ ಸಂಚಾರಿ ಕಿಟ್ಗಳನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಸುವವರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನೋ೦ದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರೆ ಸಹಕಾರ ಸಂಘದ ಸದಸ್ಯರಿಗೆ ಆದ್ಯತೆ ನೀಡಲಾಗುತ್ತದೆ.
ಆಸಕ್ತರು ಆಯಾ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳು, ಪಶು ಆಸ್ಪತ್ರೆ ಇವರಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊನಂ.8660264814 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.