![](https://blogger.googleusercontent.com/img/b/R29vZ2xl/AVvXsEjbbSURMcUdp9vWWSc6ZAsJJ3A5Nud6gBoEyFyfC2ZOcYzgBx0MALfFC307EKDHI1JBEG5qf0fuK31s4UyEynYm68dJp2QLek64Jt-R4IcVxsMYvtsR8o3gzayM2xlxTH8ZQDnWZ54t3Ek5zN62l7vZqql93VxBCATiWXVYC_DfsONnNlANak1qvMIO/w400-h225/%E0%B2%AE%E0%B2%BE%E0%B2%9A%E0%B2%95%E0%B2%A8%E0%B3%82%E0%B2%B0%20%E0%B2%B9%E0%B3%8A%E0%B2%B3%E0%B3%86%E0%B2%AC%E0%B2%B8%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0.webp)
ಮುಧೋಳ : ತಾಲ್ಲೂಕಿನ ಮಾಚಕನೂರ (ವಜ್ರಮಟ್ಟಿ) ಪುನರ್ವಸತಿ ಕೇಂದ್ರದಲ್ಲಿ ಶ್ರೀಹೊಳೆಬಸವೇಶ್ವರ ದೇವಸ್ಥಾನ, ಮಹಾದ್ವಾರ ಮತ್ತು ರಾಜಗೋಪುರ ಮತ್ತು ಬಹುಪಯೋಗಿ ಸಭಾಭವನ ನಿರ್ಮಾಣ ಮಾಡುವ ಕಾಮಗಾರಿಗೆ ರೂ.9.71 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023-24ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಅಳವಡಿಸಲು ಈ ಮೊದಲು ಕೃಷ್ಣಾಭಾಗ್ಯ ಜಲ ನಿಗಮದ ಕಛೇರಿ ಪತ್ರದಲ್ಲಿ ಸೂಚಿಸಿದ್ದನ್ನು ಮಾರ್ಪಡಿಸಿ, ಪ್ರಸ್ತುತ 2022-23ನೇ ಸಾಲಿನಲ್ಲಿ ವಾರ್ಷಿಕ ಕ್ರಿಯಾಯೋಜನೆಯ ಉಳಿತಾಯದಲ್ಲಿ ಅಳವಡಿಸಿಕೊಳ್ಳಲು ಅನುಮೋದನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಪುನರ್ವಸತಿ ಮತ್ತು ಪುನರ್ನಿರ್ಮಾಣದ ಅನುಮೋದಿತ 2022-23ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಲ್ಲಿಯೇ ಬಹುಪಯೋಗಿ ಸಭಾಭವನ ನಿರ್ಮಾಣ ಮಾಡುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಶ್ರೀಹೋಳಬಸವೇಶ್ವರ ದೇವಸ್ಥಾನವು ಜಿಲ್ಲೆಯ ವಿಶೇಷವಾಗಿ ಮುಧೋಳ ತಾಲ್ಲೂಕಿನ ಶ್ರದ್ಧಾಕೇಂದ್ರವಾಗಿದ್ದು, ಈ ಶ್ರದ್ಧಾಕೇಂದ್ರಕ್ಕೆ ಭೇಟಿ ನೀಡುವ ಭಕ್ತರಿಗೆ ಈ ಸಭಾಭವನ ಮತ್ತು ಇತರೆ ಕಾಮಗಾರಿಗಳು ಅನುಕೂಲ ಕಲ್ಪಿಸಲಿವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.