![](https://blogger.googleusercontent.com/img/b/R29vZ2xl/AVvXsEhF7yex6pY62Aa5qEisdS83tUAFnQy8a2zaP-XQlHRDFhSy1YovpmpV8aCMawZQJQcWTV6Q2qrMJSA3U4jFPSkMexY6i2FdJB8b-ASBThd96_YPYTA37s2VObCUNzAwZ6YWR2BJwrmmkEF6mTpBWP2b4_OM_9ADYQ2JTKx4giFLmzlNFjtp5w4S1GkR/w400-h205/Sheeps%20Growth%20Training%20Bagalkot.webp)
ಬಾಗಲಕೋಟೆ : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ, ಯುವತಿಯರಿಗಾಗಿ 10 ದಿನಗಳ ಕುರಿ ಸಾಕಾಣಿಕೆ ಉಚಿತ ತರಬೇತಿಯನ್ನು ಬರುವ ಮಾರ್ಚ ತಿಂಗಳಿನಲ್ಲಿ ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ಮತ್ತು ವಿಳಾಸವನ್ನು ಫೆಬ್ರವರಿ 28 ರೊಳಗಾಗಿ ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಮೊನಂ.9482188780, 9483485489ಗೆ ಸಂಪರ್ಕಿಸುವಂತೆ ಆರ್ಸೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.