![](https://blogger.googleusercontent.com/img/b/R29vZ2xl/AVvXsEiAZURmNyXDRTxh5FejNCagvjvQjN1BwlwR8AuyUB7QacdQCAyYqBkx2GUY75f8awBa6dLTbKNhMh-RoUsrwcvzA_FQGvdnOw_xHEyQcwHwz_mHOdp6rnCAtLWa0HNc5OB2a94hg4MFDP67snhu7k6YQRapeNrqf_95ue8AV3oouezca4tuc84hn_Ry/w400-h220/Mudhol%20Hound.webp)
ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯ ಐಜಾ ಮಂಡಲದ ಪ್ರಧಾನ ಕಚೇರಿಯಲ್ಲಿ ವೀರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬ್ರಹ್ಮೋತ್ಸವದ ಅಂಗವಾಗಿ ನಡೆದ ಓಟದಲ್ಲಿ ಕರ್ನಾಟಕ ರಾಜ್ಯದ ನಾಯಿಗಳು ಹಲವು ಬಹುಮಾನ ಗೆದ್ದಿವೆ.
ಮೊದಲ ಬಹುಮಾನ ಗೆದ್ದ ಮುಧೋಳ ನಾಯಿಯ ಮಾಲೀಕ ಲಾಲ್ಯ ಅವರಿಗೆ ರೂ.15,000, 2ನೇ ಬಹುಮಾನ ಗೆದ್ದ ನಾಯಿಯ ಮಾಲೀಕ ಸುಲ್ತಾನ್ ಅವರಿಗೆ ರೂ.10,000, ತೃತೀಯ ಬಹುಮಾನ ರೂ.8,000 ವನ್ನು ಡಾಬರ್ಮನ್ ನಾಯಿಯ ಮಾಲೀಕ ತೇಜ ಅವರಿಗೆ ವಿತರಿಸಲಾಯಿತು.
ಈ ಓಟದ ಸ್ಪರ್ಧೆಯಲ್ಲಿ ಮೂರು ರಾಜ್ಯಗಳ ಶ್ವಾನಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಉತ್ಸಾಹಿಗಳು ಸಹ ಭಾಗವಹಿಸಿದ್ದರು.
ಈ ನಾಯಿ ಓಟ ಸ್ಪರ್ಧೆಯಲ್ಲಿ ನಾಯಿಗಳ ಮುಂದೆ ರಿಮೋಟ್ ಮೂಲಕ ನಿಯಂತ್ರಿಸುವ ಆಟಿಕೆಯನ್ನು ಇಡುತ್ತಾರೆ. ನಾಯಿಗಳು ಈ ಆಟಿಕೆಯ ಹಿಂದೆ ಓಡಬೇಕು. ಯಾವ ನಾಯಿ ಮೊದಲು ಗಮ್ಯಸ್ಥಾನ ತಲುಪುತ್ತದೆಯೋ ಆ ನಾಯಿಯೇ ಗೆದ್ದಂತೆ ಎಂದು ನಿರ್ಧರಿಸಲಾಗುತ್ತದೆ.
ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ವ್ಯವಸ್ಥೆಯಲ್ಲೂ ಮುಧೋಳ್ ತಳಿಯ ನಾಯಿಗಳು ಸೇರ್ಪಡೆಗೊಂಡಿವೆ.