![](https://blogger.googleusercontent.com/img/b/R29vZ2xl/AVvXsEhGDG40pgxMsTuGF8RM4Vq_1_q61Q2UZR0QQnbpecdMO6QQ_efK7j7S1RMPE5qqhqHxhWtuf5mwY2n95N8RpbJCLxrQpoLN8MuCSVktwCZT73BkpMgbQhin6T0LcOiaLLjjtw2RXpiked-4PkPj0UIKBtXtwVRRICSyQ7ZamS1GkKc5TA8M1suIuoQa/w400-h266/Jamkhandi%20Power%20Outage.webp)
ಬಾಗಲಕೋಟೆ: ಜಮಖಂಡಿ ಹೆಸ್ಕಾಂ ವಿಭಾಗದ ವ್ಯಾಪ್ತಿಯಲ್ಲಿ ಬರುವ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ಉಪವಿಭಾಗದಲ್ಲಿರುವ ಚಿಮ್ಮಡ 110ಕೆಪಿ ಮಾರ್ಗದಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಒಳ-ಹೊರ ಕುಣಿಕೆ ಗೋಪುರವನ್ನು ಅಳವಡಿಸುವ ಕಾಮಗಾರಿಯನ್ನು ಬೃಹತ್ ಕಾಮಗಾರಿ ವಿಭಾಗ ಕೆಪಿಟಿಸಿಎಲ್ ರವರು ಫೆಬ್ರವರಿ 11 ರಂದು ಬೆಳಗ್ಗೆ 9 ರಿಂದ ಸಂಜೆ 5 ವರೆಗೆ ಮಾರ್ಗ ಮುಕ್ತಿ ಕೈಗೊಳ್ಳಲು ಉದ್ದೇಶಿಸಿದ್ದಾರೆ. ಇದರಿಂದ ತೇರದಾಳ ವಿದ್ಯುತ್ ಉಪ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲ 11ಕೆವಿ ಫೀಡರ್ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಹಾಗೂ ರೈತರು ಸಹಕರಿಸುವಂತೆ ಜಮಖಂಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.