ಭಾವೈಕ್ಯತೆಯ ಸರದಾರ ಇಬ್ರಾಹಿಂ ಸುತಾರ್

ನೀಳಕಾಯದ, ಎತ್ತರ ನಿಲುವಿನ ಭಕ್ತಿ, ವಿನಯಗಳೇ ಮೈವೆತ್ತಂತಿರುವ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಹಿರಿಯ ಜೀವ ಇಬ್ರಾಹಿಂ ಸುತಾರ ಎರಡೂ ಕೈಗಳನ್ನು ಜೋಡಿಸಿ ಮಿಶ್ರದೇಶ ರಾಗದಲ್ಲಿ ತನ್ಮಯರಾಗಿ ಹೀಗೆ ಪ್ರಾರ್ಥಿಸುತ್ತಿದ್ದರೆ ನೆರೆದಿದ್ದ ಸಭಿಕರೆಲ್ಲ ತಮ್ಮ ಸುತ್ತಲಿನ ಎಲ್ಲ ಭೇದಗಳನ್ನು ಬದಿಗಿಟ್ಟು ಅಕ್ಷರಶಃ ಮಂತ್ರಮುಗ್ಧ. ಹಾಡು ಮುಗಿಯುವ ಹೊತ್ತಿಗೆ ಅಲ್ಲಿ ಭಾವೈಕ್ಯದ ದಿಗ್ದರ್ಶನ.

ಉತ್ತರ ಕರ್ನಾಟಕದ ಪಾರಿಜಾತ ಕಲೆಯನ್ನು ಭಜನೆಗೆ ಅಳವಡಿಸಿ ಸಂವಾದ ರೂಪದ ಹೊಸ ಸಂಗೀತ ಪ್ರವಚನದಿಂದಾಗಿ ಇಬ್ರಾಹಿಂ ಸುತಾರ ಇಂದು ರಾಜ್ಯಾದ್ಯಂತ ಅಷ್ಟೇ ಅಲ್ಲ, ನೆರೆ ರಾಜ್ಯ ಮತ್ತು ವಿದೇಶಗಳಲ್ಲೂ ಚಿರಪರಿಚಿತ. ವೇದ, ಪುರಾಣ, ತತ್ವಶಾಸ್ತ್ರ, ಮಹಾಕಾವ್ಯ, ಧರ್ಮಗ್ರಂಥಗಳ ಸಾಹಿತ್ಯ ಸಾರವನ್ನು ಅತ್ಯಂತ ಸರಳವಾಗಿ ಕೇಳುಗರ ಹೃದಯಕ್ಕಿಳಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಸುತಾರ, ಕಳೆದ 40 ವರ್ಷಗಳಿಂದ ಮನಸುಗಳನ್ನು ಕಟ್ಟುವ ಕೈಂಕರ್ಯದಲ್ಲಿ ಶ್ರದ್ಧಾಭಕ್ತಿಯಿಂದ ತೊಡಗಿದ್ದಾರೆ.

`ಭೇದ ಎನಿಸದೇ ಕೂಡಿ ಬಾಳುವುದೇ ನಿಜ ಬದುಕು' ಎನ್ನುವುದನ್ನು ವಿವಿಧ ಧರ್ಮಗಳ ಸಾರ, ವೇದಗಳ ಉಕ್ತಿ, ವಚನಗಳ ಮೂಲಕ ಮನದಟ್ಟು ಮಾಡುತ್ತ ಧರ್ಮಸಮನ್ವಯತೆ ಮತ್ತು ಭಾವೈಕ್ಯತೆ ಮೂಡಿಸುವಲ್ಲಿ ಸುತಾರ ಯಶಸ್ವಿಯಾಗಿದ್ದಾರೆ. ಇವರ ಸಂವಾದಿ ರೂಪದ ಪ್ರವಚನ ಶೈಲಿ ಕೇಳುಗರಿಗೆ ಹೃದ್ಯವಾಗಿದೆ.

ತಾರುಣ್ಯದಲ್ಲಿ `ರಂಜಾನ್ ಜಾಗರಣೆ ಸಂಘ' ಕಟ್ಟಿ ಸ್ನೇಹಿತರೊಂದಿಗೆ ಅಹೋರಾತ್ರಿ ರಿವಾಯತ್, ಅಲಾಯಿ, ತತ್ವ ಪದಗಳನ್ನು ಹಾಡಿ ಜನರನ್ನು ರಂಜಿಸುತ್ತಿದ್ದ ಯುವಕ ಇಬ್ರಾಹಿಂ ಸುತಾರ ಮುಂದೆ `ಭಾವೈಕ್ಯ ಜನಪದ ಸಂಗೀತ ಮೇಳ' ಕಟ್ಟಿ ಆ ಮೂಲಕ ತಮ್ಮ ಭಜನೆ ಮತ್ತು ತತ್ವಶಾಸ್ತ್ರ ಪ್ರವಚನದಿಂದಾಗಿ ಕರ್ನಾಟಕದ ಮನೆಮಾತಾದರು. ಜನತೆ ಇವರನ್ನು ಅಭಿಮಾನದಿಂದ `ಕನ್ನಡದ ಕಬೀರ' ಎಂದು ಕರೆಯುತ್ತಾರೆ. 76ರ ಇಳಿವಯದಲ್ಲೂ ಈ ಮಾಗಿದ ಜೀವ `ಭಾವೈಕ್ಯತೆಯ ಸಂದೇಶ ಸಾರುತ್ತ ಪ್ರೇಮವನ್ನು ಬೆಳೆಸುವ' ಕಾಯಕದಲ್ಲಿ ತೊಡಗಿದೆ.

ಕೂಡಲಸಂಗಮ, ಬನವಾಸಿ, ಬೆಂಗಳೂರು, ಹಂಪಿ, ಬಸವಕಲ್ಯಾಣ, ಸೊಲ್ಲಾಪುರ, ಭುವನೇಶ್ವರ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಈ ದೇಶದ ಧರ್ಮಸಮನ್ವಯತೆ ಮತ್ತು ಭಾವೈಕ್ಯತೆಗೆ ಇಬ್ರಾಹಿಂ ಸುತಾರ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ, ಇಂಚಲ ಮಠದಿಂದ ಕನ್ನಡದ ಕಬೀರ, ಆಳ್ವಾ ನುಡಿಸಿರಿ ಪ್ರಶಸ್ತಿ ಸೇರಿದಂತೆ ಈ ವರೆಗೆ 38 ಪ್ರಶಸ್ತಿಗಳು ಇವರ ಮುಡಿಗೇರಿವೆ.

ತಾಲ್ಲೂಕಿನ ಮಹಾಲಿಂಗಪುರದ ಶ್ರೀ ಇಬ್ರಾಹೀಮ ಎನ್. ಸುತಾರ ಅವರು ದಿನಾಂಕ 10-05-1940 ರಲ್ಲಿ ಮಹಾಲಿಂಗಪುರದ ಬಡಕುಟುಂಬದಲ್ಲಿ ಜನಿಸಿದರು. 1970 ರಲ್ಲಿ “ಭಾವೈಕ್ಯ ಜನಪದ ಸಂಗೀತ ಮೇಳ” ವನ್ನು ಸ್ಥಾಪಿಸಿದರು. ಕಳೆದ 44 ವರ್ಷಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ಬೀರುತ್ತ ಬಂದಿರುತ್ತಾರೆ. ಪ್ರತಿವರ್ಷ ನೂರಾರು ಕಾರ್ಯ ಕ್ರಮಗಳನ್ನು ನೀಡುತ್ತ, ಹಿಂದು-ಮುಸ್ಲಿಂ ರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತೊಡದಿದ್ದಾರೆ.

ತಂದೆ-ತಾಯಿ: ತಂದೆ ನಬೀಸಾಹೇಬ,  ತಾಯಿ ಆಮೀನಾಬಿ
ಜನನ: ೧೦-೦೫-೧೯೪೦ ಬಡಕುಟುಂಬದಲ್ಲಿ
ಜನಿಸಿದ ಸ್ಥಳ: ಮಹಾಲಿಂಗಪುರ
ಮನೆತನದ ಮೂಲ ಹೆಸರು : ಬಿಸ್ತಿ
ಶಿಕ್ಷಣ : ಉರ್ದು ೩ನೇ ತರಗತಿ
ತಂದೆಯವರ ಕಾಯಕ : ಬಡಿಗತನ
ಬದಲಾದ ಅಡ್ಡ ಹೆಸರು : ಸುತಾರ (ಬಡಿಗೇರ)
ರಂಜಾನ್ ಜಾಗರಣಿ ಸಂಘ : ಬಾಲ್ಯ ಸ್ನೇಹಿತರೊಂದಿಗೆ(೧೯೬೦ರಲ್ಲಿ)
ಗುರು ದೀಕ್ಷೆ: ಸೂಫಿ ಸಂತರಾದ ಹಜರತ್ ಶೇಖುಲ್ ಮಷಾಯಿಕ ಅಬ್ಭಾಸ್ಅಲಿ ಜುನ್ನೇದಿ ಸಾ|| ಕುಡಚಿ ಇವರೊಂದಿಗೆ
ಧರ್ಮ ಪತ್ನಿ : ಮರೇoಬಿ
ಮಕ್ಕಳು : ಕೌಸರಬಾನು, ರಿಜವಾನಾ, ಹುಮಾಯೂನ.
ಮೂಲ ಕಾಯಕ : ನೇಕಾರಿಕೆ
ಪ್ರಭಾವ ಬೀರಿದ ಪದ್ಯ :  ಮಾತು ಮಾತಿಗೆ ಶಂಕರಾ (ಶ್ರೀ ಶಂಕರಾನಂದ ಯೋಗಿ ವಿರಚಿತ ಕೈವಲ್ಯ ನವನೀತ ಗ್ರಂಥ)

ಜಿಜ್ಞಾಸೆ :
ಎಲ್ಲ ಧರ್ಮ ಗಳ ತತ್ವ ಅರಿಯಬೇಕೆಂಬುವುದು
ಎಲ್ಲ ಸಿದ್ಧಾಂತಗಳ ಗುರಿ ಮತ್ತು ಸಾರ ತಿಳಿಯಬೇಕೆಂಬುವುದು
ಜೀವನದ ಮಹತ್ವದ ತಿರುವು : ಪ್ರವಚನ ಮತ್ತು ಭಜನೆಯ ಆಯ್ಕೆ

ಭಜನೆ ಕಲಿಸಿದವರು :
ಶ್ರೀ ಬಸಪ್ಪಣ್ಣ ಹಣಗಿಕಟ್ಟಿ, ಹುಲ್ಯಾಳ
ಶ್ರೀ ಗುರುಪಾದಪ್ಪ ಕಕಮರಿ, ಮಹಾಲಿಂಗಪುರ
ಶ್ರೀ ಭವರುದ್ದೀನ್ ಪೆಂಡಾರಿ, ಮಹಾಲಿಂಗಪುರ
ಶ್ರೀ ಮಲ್ಲಪ್ಪ ಕಲಾದಗಿ, ಮಹಾಲಿಂಗಪುರ
ಪ್ರಥಮದಲ್ಲಿ ಭಜನೆ ಪ್ರಾರಂಭಿಸಿದ ಸ್ಥಳ : ಶ್ರೀ ಗುರು ಸಾಧು ನಿರಂಜನಾವಧೂತರ ಗುಡಿ, ಮಹಾಲಿಂಗಪುರ
ಭಜನೆಗೆ ತುಂಬಾ ಪ್ರೋತ್ಸಾಹ ನೀಡಿದವರು :
ಶ್ರೀ ಚನ್ನಪ್ಪಣ್ಣ ಕಿರಗಟಗಿ
ಶ್ರೀ ಪಾತ್ರೋಟ ಬಂಧುಗಳು
೧೯೭೦ರಲ್ಲಿ : ‘ಶ್ರೀ ಗುರು ಸಾಧು ನಿರಂಜನಾವಧೂತರು ಭಾವೈಕ್ಯ ಜನಪದ ಸಂಗೀತ ಮೇಳ’ ಸ್ಥಾಪನೆ
ಸಂವಾದರೂಪ ಭಜನೆಯ ವಿನೂತನ ಕಲಾ ಪ್ರಕಾರದ ಹುಟ್ಟಿಗೆ ಕಾರಣರಾದವರು : ಶ್ರೀ ಮಲ್ಲಪ್ಪಣ್ಣ ಶಿರೋಳ
ವಿನೂತನ ಕಲಾ ಪ್ರಕಾರ : ಪ್ರಶ್ನೋತ್ತರಗಳ ಜೊತೆ ಪದ್ಯಗಳನ್ನು ಹಾಡುವ ಸಂವಾದ ರೂಪ ಭಜನೆ

ನೀಡುವ ಕಾರ್ಯಕ್ರಮಗಳು ಹೆಸರು :
ಭಾವೈಕ್ಯ ಭಕ್ತಿ ರಸಮಂಜರಿ
ಗೀತ ಸಂವಾದ ತರಂಗಿಣಿ
ಆಧ್ಯಾತ್ಮ ಸಂವಾದ ತರಂಗಿಣಿ

ಕಾರ್ಯಕ್ರಮದ ವಿಶೇಷತೆ : ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಸರ್ವ ಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆಯ ಸಂದೇಶ ಸಾರುವುದು
ಮಾತುಗಾರಿಕೆಗೆ  ಸ್ಪೂರ್ತಿ : ಶ್ರೀ ಗುರುಪಾದಪ್ಪ ಕಕಮರಿ

ಭಜನಾ ಸಂಘದ ವತಿಯಿಂದ ಜನಪರ ಕಾರ್ಯಕ್ರಮಗಳು :
ಯೋಗಾಸನ ಶಿಬಿರಗಳು
ಸಾಕ್ಷರತಾ  ಶಿಬಿರಗಳು
ಕುಡಿಯುವ ನೀರಿನ್ ಟ್ಯಾಂಕ್
ಬೋರವೆಲ್ ವ್ಯವಸ್ಥೆ
ಶಾಲಾ ಕೊಠಡಿಗಳ ನಿರ್ಮಾಣ

ಶ್ರೀ ಗುರು ಸಾಧು ನಿರಂಜನಾವಧೂತ ಬ್ರಹ್ಮ ವಿದ್ಯಾಶ್ರಮ
೧೯೮೪ರಲ್ಲಿ : ‘ಶ್ರೀ ಗುರು ಸಾಧು ನಿರಂಜನಾವಧೂತರು ಕಮೀಟಿ ಹಾಗೂ ಭಜನಾ ಮಂಡಳಿ’ ಟ್ರಸ್ಟ್ ಸ್ಥಾಪನೆ
ವೇದಾಂತದಲ್ಲಿ ಪ್ರವೃತ್ತಿಗೆ ಕಾರಣರಾದವರು : ಶ್ರೀ ಶಿವಾನಂದ ಸ್ವಾಮಿಗಳು, ರಕ್ಷಿ ಶಿರಗಾಂವ
ಶಾಸ್ತ್ರಭ್ಯಾಸ : ಪ್ರಕರಣ ಪ್ರವೀಣ ಶ್ರೀ ಬಸವಾನಂದರ ಬಳಗ ಮಹಾಲಿಂಗಪುರದಲ್ಲಿ
ಶಾಸ್ತ್ರಭ್ಯಾಸ ಮಾಡಿಸಿದ ಪೂಜ್ಯರು :
ಶ್ರೋ. ಬ್ರ. ಶ್ರೀ ರಾಮಚಂದ್ರ ಶೇಡಜಿ ಶಾಸ್ತ್ರಿಗಳು, ಸಿದ್ಧಾಪೂರ
ಶ್ರೋ. ಬ್ರ. ಶ್ರೀ ಸಿದ್ಧಯ್ಯಪ್ಪ ಮಹಾರಾಜರು, ಸೋಲಾಪುರ
ಶ್ರೋ. ಬ್ರ. ಶ್ರೀ ಶಂಭುಲಿಂಗ ಶಾಸ್ತ್ರಿಗಳು, ದರೂರ
ಶ್ರೋ. ಬ್ರ. ಶ್ರೀ ಶಾಂತಾನಂದ ಸ್ವಾಮಿಗಳು, ಮೇರಾಪುರಹಟ್ಟಿ
ಶ್ರೋ. ಬ್ರ. ಶ್ರೀ ಸಹಜಾನಂದ ಸ್ವಾಮಿಗಳು, ಮಹಾಲಿಂಗಪುರ
ಆಧ್ಯಾತ್ಮಿಕ ವಿಶ್ವವಿದ್ಯಾಲಯ : ಶ್ರೀ ಮಲ್ಲೇಶಪ್ಪ ಕಟಗಿಯವರ ಮನೆ

ಆಧ್ಯಾತ್ಮ ಚಿಂತನೆಗೆ ಆಶ್ರಯ ನೀಡಿದವರು :
ಶ್ರೀ ಮಲಕಾಜಪ್ಪ ಕಟಗಿ ಮತ್ತು ಶ್ರೀಮತಿ ಭಾಗೀರಥಿ ಮ . ಕಟಗಿ ಶರಣ ದಂಪತಿಗಳು
ಶ್ರೀ ಮಹಾಲಿಂಗಪ್ಪಣ್ಣ ಎಂ. ಢಪಳಾಪೂರ
ಪ್ರವಚನ ಕ್ಷೇತ್ರಕ್ಕೆ ನೂಕಿದವರು :  ಶ್ರೀ ಶಂಭುಲಿಂಗ ಶಾಸ್ತ್ರಿಗಳು, ದರೂರ
ಹೊಸ ಪರಿಕಲ್ಪನೆ : ಶ್ರಾವಣಕ್ಕೊಂದು ಸಮಾಜಸೇವೆ
ಶ್ರಾವಣಕ್ಕೊಂದು ಸಮಾಜಸೇವೆಗೆ ಪ್ರೇರಣೆ : ವೇದಾಂತ ಕೇಸರಿ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿಜಯಪುರ

ಶ್ರಾವಣಕ್ಕೊಂದು ಸಮಾಜಸೇವೆಗಳು :
೧೯೮೮ರಲ್ಲಿ ಶೇಗುಣಸಿ- ತೇರದಾಳ ಮಧ್ಯೆ ೯ ಕಿ.ಮೀ. ಶ್ರಮದಾನದಿಂದ ರಸ್ತೆ ನಿರ್ಮಾಣ
೨೦೦೨ರಲ್ಲಿ ಢವಲೇಶ್ವರಲ್ಲಿ ‘ಶ್ರೀ ವಿವೇಕಾನಂದ ಪ್ರಾಥಮಿಕ ಶಾಲೆ’ ಯ ನಿರ್ಮಾಣ
೨೦೦೯ರಲ್ಲಿ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ‘ಕಲ್ಯಾಣ ಮಂಟಪ’ ನಿರ್ಮಾಣ
೨೦೧೧ರಲ್ಲಿ ಅರಳಿಮಟ್ಟಿಯಲ್ಲಿ ‘ಶ್ರೀ ಬಸವೇಶ್ವರ ಯಾತ್ರಿ ನಿವಾಸ’
ಪುತ್ರನ ವಿವಾಹ ವಿಶೇಷತೆ: ಕಲ್ಯಾಣ ಮಹೋತ್ಸವದ ನಿಮಿತ್ಯ “ಶರಣರ – ಸಂತರ – ಸೂಫಿಗಳ ಭಾವೈಕ್ಯ ಸಂಗಮ ಕಾರ್ಯಕ್ರಮ

ಭಾವೈಕ್ಯ ಜನಪದ ಸಂಗೀತ ಮೇಳದ ಪ್ರಸ್ತುತ ಕಲಾವಿದರು:
ಶ್ರೀ ಶ್ರೀಮಂತಪ್ಪ ಕಣಬೂರ
ಶ್ರೀ ರಾಜೇಸಾಬ ಹಳಿಂಗಳಿ
ಶ್ರೀ ಈಶ್ವರಪ್ಪ ಮುಂಡಗನೂರ
ಶ್ರೀ ಮೆಹಬೂಬ ಸನದಿ
ಶ್ರೀ ಮಹಾದೇವಪ್ಪ ಕರಡಿ
ಶ್ರೀ ಶ್ರೀಶೈಲ ಜಕ್ಕಪ್ಪ್ನವರ
ಶ್ರೀ ಮಹಾದೇವಪ್ಪ ಕೌಜಲಗಿ

ಹೊರರಾಜ್ಯಗಳಲ್ಲಿ ಕಾರ್ಯಕ್ರಮ: ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಒರಿಸ್ಸಾ, ರಾಜಸ್ಥಾನ,ಗೋವಾ
ಸುತಾರ್ ಅವರ ಮರಣ : ೦೫-೦೨-೨೦೨೨
ತಾಯಿಯವರ ವಿಯೋಗ : ೧೯-೦೪-೧೯೯೪
ತಂದೆಯವರ ವಿಯೋಗ : ೦೫-೦೧-೨೦೦೧
ಜೀವನದ ಗುರಿ : ಜೀವನದುದ್ದಕ್ಕೂ ಭಾವೈಕ್ಯತೆಯ ಸಂದೇಶ ಸಾರುವುದು.
ನವೀನ ಹಳೆಯದು